ಭವ್ಯಶ್ರೀ ಫಿಲಂ ಲಾಂಛನದಲ್ಲಿ ಕು.ಅನುರಾಧಾ ಎಲ್. ಮಹೇಶ್ ನಿರ್ಮಿಸಿರುವ, ಎಲ್.ಮಹೇಶ್ ಕೋಲಾರ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ ಚಿತ್ರ `ಕರುನಾಡ ಕಣ್ಮಣಿ` ಇದೇ ದಿ. 18ರ ಗುರುವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಇತ್ತೀಚೆಗಷ್ಟೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಈ ಚಿತ್ರದ ಲಿರಿಕಲ್ ಹಾಡನ್ನು ಬಿಡುಗಡೆ ಮಾಡಿದ್ದರು.
ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಬೆಳೆಸಿ ಎಬ ಸಂದೇಶ ಈ ಚಿತ್ರದಲ್ಲಿದೆ. ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಟನಿಗಾಗಿ ಏನೆಲ್ಲಾ ಮಾಡುತ್ತಾನೆ, ಅದೇ ನಟ ತನ್ನ ಅಭಿಮಾನಿಗೋಸ್ಕರ ಏನು ಮಾಡುತ್ತಾನೆಂದು ಈ ಚಿತ್ರದಲ್ಲಿ ಹೇಳಲಾಗಿದೆ. ಹರ್ಷ ಕಾಗೊಡು ಅವರ ಸಂಗೀತ, ಶಿವಕುಮಾರ್ ಅವರ ಹಿನ್ನೆಲೆ ಸಂಗೀತ, ಗೌರಿಶಂಕರ ಮತ್ತು ಶೇಖರರಾಜ್ ಸಂಭಾಷಣೆ, ಶ್ರೀತೇಜ್ ಅಭಿನವ ಶ್ರೇಯಸ್ ಗೌರಿಶಂಕರ್ ಸಾಹಿತ್ಯ, ಎಸ್.ರೂಪೇಶ್ ಮೊದಲಿಯಾರ್ ಮತ್ತು ಮಾದೇಶ್ ಅವರ ಛಾಯಾಗ್ರಹಣ, ರವಿತೇಜ ಅವರ ಸಂಕಲನ ಈ ಚಿತ್ರಕ್ಕಿದೆ.
ಈ ಚಿತ್ರದಲ್ಲಿ ಗೌರಿಶಂಕರ್, ಕವಿತಾ, ಕು.ಅನುರಾಧಾ, ಕು.ವರಲಕ್ಷ್ಮಿ, ಕು.ಭವ್ಯಶ್ರೀ, ತುಳಸಿ, ಶೇಖರರಾಜ್, ವರುಣ್ ಕುಮಾರ್, ಶಿವಕುಮಾರ ಗೌಡ, ಅಭಿನವ ಶ್ರೇಯಸ್, ಕಬಾಬ್ ಮಂಜ, ಅನಂತು ತೇರಳ್ಳಿ, ರವಿ, ಸುಮಂತ್ ಹಾಗೂ ಇತರರು ನಟಿಸಿದ್ದಾರೆ.